karunada geleya

dsfdsf

ಡಿಸೆಂ 22, 2011

ಕನ್ನಡ ಸಾಹಿತ್ಯಕ್ಕೆ ಕುವೆಂಪುರವರ ಕಾಣಿಕೆ

ಕನ್ನಡ ನಾಡಿನ ಹೆಮ್ಮೆಯ ಇತಿಹಾಸ ಸಾಹಿತ್ಯ , ಸಂಸ್ಕೃತಿಗಳನ್ನು ಬಿಂಬಿಸುವ ಕನ್ನಡನಾಡಿನ ಜನಮಾನಸದಲ್ಲಿ ಬೆರೆತು ಹೋಗಿರುವ ಈ ಗೀತೆ ಪ್ರತಿಯೊಬ್ಬ ಕನ್ನಡಿಗನ ಜೀವನಾಡಿ. ಇಂತಹ ಅನೇಕ ರಚನೆಗಳನ್ನು ಕನ್ನಡಕ್ಕೆ ನೀಡಿದ, ಕನ್ನಡಕ್ಕೆ ಮೊದಲ ಜ್ನನಪೀಟವನ್ನು ತಂದುಕೂಟ್ಟ, ವಿಶ್ವಮಾನವ ಪ್ರಜ್ನೆಯನು ಜಗತ್ತಿಗೆ ಸಾರಿದ ಮಹಾಕವಿ ಕುವೆಂಪು ನವೋದಯ ಕಾಲದ ಕನ್ನಡದ ಸಾಹಿತಿಗಳಲ್ಲಿ ಅಗ್ರಗಣ್ಯರು. ಭಾವಗೀತೆ, ಮಹಾಕಾವ್ಯ, ನಾಟಕ, ಕಥೆ, ಕಾದಂಬರಿ, ಜೀವನ ಚರಿತ್ರೆ, ವಿಮಶೆ೯ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ರಚಿಸುವ ಮೂಲಕ ಪಂಡಿತರಿಂದ ಪಾಮರರವರೆಗೆ ಎಲ್ಲರ ಮೆಚ್ಚುಗೆಗಳಸಿದ್ದಾರೆ. 

ಡಿಸೆಂ 21, 2011

ರಾಧಿಕಾ ಪಂಡಿತ್ ಮತ್ತು ದ್ರುವ ಸರ್ಜಾ ಅದ್ದೂರಿ

ರಾಧಿಕಾ ಪಂಡಿತ್ ಮತ್ತು ದ್ರುವ ಸರ್ಜಾ ಅದ್ದೂರಿ ಫಿಲಂ ಚಿತ್ರೀಕರಣ ಸಿ ಎಂ ಆರ್ ಕಾಲೇಜ್ ಬೆಂಗಳೂರುನಲ್ಲಿ ನಡೆದ ಸಮಯದಲ್ಲಿ ನನ್ನ ಅಭಿಮಾನಕ್ಕಾಗಿ ಅವರೊಂದಿಗೆ ತೆಗಿಸಿಕೊಂಡ ಚಿತ್ರಗಳು.

ಡಿಸೆಂ 17, 2011

ಹಂಸಲೇಖ ಅವರು


ಹಂಸಲೇಖ ಎಂದೊಡನೆ ಸಂಗೀತ ಬ್ರಹ್ಮ , ಸಂಗೀತ ಮಾಯಾಗಾರ , ಸಂಗೀತ ಮಾಂತಿಕ ಎಂಬ ನೂರಾರು ಪದಗಳು ನಮ್ಮ ಬಾಯಿಂದ ನಮಗೇ ಗೊತ್ತಿಲ್ಲದೆ ಉರುಳಲಾರಂಭಿಸುತ್ತಎ ಇಂತಹ ಮಾಯಾಗರ ಹಂಸಲೇಖ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ವಿಭಿನ್ನ ಸಂಗೀತವನ್ನು ಕೇಳುಗರಿಗೆ ನೀಡುತ್ತಾ , ಮುದ್ದು ಮನಸನ್ನು ಕದಿಯುತ್ತಾ ಬಂದಾತನಿಗೊಂದು ನಮನ

ಆಗ 8, 2011

ಸ್ನೇಹ ದಿನ

ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಗೆಳೆತನದ ದಿನವನ್ನಾಗಿ ಆಚರಿಸಲಾಗುತ್ತಿದೆ. ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಹುಟ್ಟಿ ಇಂದು ಪ್ರಪಂಚದಲ್ಲೆಡೆ ಹರಡಿಕೊಂಡಿದೆ. ೧೯೩೫ರಲ್ಲಿ ಇದನ್ನು ಅಧಿಕೃತ ರಜಾದಿನವನ್ನಾಗಿ ಅಮೇರಿಕಾ ದೇಶವು ಘೋಷಿಸಿತ್ತು.ಸ್ನೇಹದ ಸಂಕೇತವಾಗಿ ಪರಸ್ಪರರಿಗೆ 'ಗೆಳೆತನದ ಪಟ್ಟಿ'(Friendship band) ಕಟ್ಟಿ,ಈ ದಿನವನ್ನು ಆಚರಿಸಲಾಗುತ್ತಿದೆ. ಪ್ರೀತಿಗಿಂತ ಸ್ನೇಹ ದೊಡ್ದದು ಎಂದು ಹಲವಾರು ಸಿನಿಮಾಗಳಲ್ಲಿ ಕೇಳಿರಬಹುದು ಬಹುಶಃ ಅದು ಸತ್ಯ, ಏಕೆಂದರೆ ಪ್ರೀತಿಯ ಪರಿದಿಗಿಂತ ಸ್ನೇಹದ ಪರಿದಿ ತುಂಬಾ ವಿಸ್ತಾರವಾದುದು. ಯಾವ ಸ್ನೇಹದಲ್ಲಿ ಪ್ರೀತಿ ಇರುತ್ತದೊ ಅ ಪ್ರೀತಿಯಲ್ಲಿ ಸ್ನೇಹ ಇರುತ್ತದೆ. ಏಕೆಂದರೆ "ಸ್ನೇಹ ಮತ್ತು ಪ್ರೀತಿ ಎರಡು ಮಾನವನ ದೇಹದ ಮಾಂಸ ಮತ್ತು ರಕ್ತವಿದ್ದಂತೆ"

ಜೂನ್ 24, 2011

ಜೂನ್ 13, 2011

ಹೃದಯ ಹಂದರ

ಓ ನನ್ನ ಬಂಗಾರ
ನಿನಗೆ ಚಂದ್ರನ ಮುಖದ ಶೃಂಗಾರ
ಮಾಡಲೇನು ನಿನಗಾಗಿ ನಾ ಸಮರ

ಬಯಸಿದೆ ನಾ ಪ್ರೀತಿಯನು

      ರೆಕ್ಕೆ ಬಿಚ್ಚಿ ಹಾರಿದೆ ನಿನ್ನ ಪ್ರೀತಿಯಲಿ
ನೂರಾರು ಕನಸುಗಳು ಕಂಡೆ ರಾತ್ರಿಯಲಿ
ತೇಲಿದೆ ನಾನು ಪ್ರೀತಿಯ ನದಿಯಲಿ
ಬಯಸಿದೆ ನಾ ಪ್ರೀತಿಯನು ನಿನ್ನೆದೆಯಲಿ

    ಓ ನನ್ನ ಸ್ನೇಹ ಜೀವಿಯೇ 
ಬರುವಿಯಾ ? ನೀ ನನ್ನೊಂದಿಗೆ 
ಬಾಳ ಬೆಳಗುವ ಬೆಳದಿಂಗಳಾಗಿ
ಈ ನನ್ನೆದೆಯಾ ಗುಡಿಗೆ. 
-- 

ಪರಶುರಾಮ ಎಂ ಎಸ್ 
    ತೆಗ್ಗಿಹಳ್ಳಿ 
                                               

ಜೂನ್ 10, 2011

ಸ್ನೇಹಿತರು

ಹಕ್ಕಿಗಳು ನಾವು ಸುಳಿದರೆ ಹಕ್ಕಿಗಳು ನಾವು
ಕಾರ್ಮೋಡಕ್ಕೆ ಹಾರುವ ಗಾಳಿಪಟಗಳು ನಾವು
ಮಿಂಚನ್ನು ಹಿಡಿದು ಬೆಳಗುವೆವು ನಾವು
ಸಂತೋಷದ ಮಳೆಯ ಹರಿಸುವೆವು ನಾವು

ಮಿತ್ರರೆ ಇಂದು ನಮಗೆಲ್ಲ ಬಂದುಗಳು
ಬಿಡಿಸುವೆವು ಬಾಳಿನ ಹರ್ಷದ ಚಿತ್ತಾರಗಳು
ನೋವಿನ ನಲಿವಿನ ಈ ನಮ್ಮ ಕಂಗಳು
ತೊಡುವೆವು ಬದುಕಿನ ದಾರಿಯ ಸುರಂಗಗಳು

ಒಲವೆಲ್ಲ ಇಂದು ನಮಗೆ ಗೆಲುವಾಗಿ
ಒಗ್ಗಟ್ಟು ನಮಗಿಂದು ಛಲವಾಗಿ 
ನಂಬಿಕೆಯು ಎಲ್ಲವು ಬಳಿಯಲ್ಲೆ ಅಂದು
ಸ್ನೇಹ ಒಂದೇ ನಮಗೆ ಶಕ್ತಿಯಂತು ಇಂದು   

ಜೂನ್ 4, 2011

ಸ್ನೇಹ

ಸ್ನೇಹದ ಅರ್ಥವೇ ತಿಳಿಯದ ಏಷ್ಟೋ ಮಂದಿ ತಮ್ಮ ಸ್ವಾರ್ಥಕೊಸ್ಕರ ಸ್ನೇಹದ ನಾಟಕವಾಡುತ್ತಾರೆ. ಇಂತವರಿಂದ ಸ್ನೇಹ ಪದದ ಅರ್ಥವೇ ಬದಲಾಗುತ್ತಿದೆ. ಸ್ನೇಹವೆಂದರೆ ನಿಸ್ವಾರ್ಥದಿಂದ ಕೂಡಿದ್ದು. ತಮ್ಮ ನಡೆಯಂತೆ ಪರರು ನಡೆಯಬೇಕೆಂಬುದು ಇವರ ಆಸೆ. ಮತ್ತೊಂಬರಿಂದ ಸಹಾಯ, ಅವಶ್ಯಕತೆ ಇದ್ದಾಗ ಸ್ನೇಹ ಇಲ್ಲವಾದರೆ ಅವರಿಂದ ದೂರವಾಗುವುದು. ಸ್ನೇಹವೆಂದರೆ ಪರಸ್ಪರ ಕಷ್ಟ-ಸುಖಗಳ ತೋಡಿಕೊಳ್ಳುವ ಸೇತುವೆ ಎಂಬುದು ಅವರಿಗೆ ತೀಳಿಯದು.

ಜೂನ್ 3, 2011

ಮಿನಿಗವನ

ಗೇಳತಿ, ನೀನು ಬರೆಯಬಲ್ಲೆಯಾ
             ಮಿನಿಗವನಗಳನ್ನು?
ಇಲ್ಲ ಗೆಳೆಯಾ...... ಆದರೆ ಧರಿಸಬಲ್ಲೆ
            "ಮಿನಿ ಗವನು".. ಗಳನ್ನು !

ಕನ್ನಡ ಭಾಷೆಯೇ ಕನ್ನಡಿಗರ ಉಸಿರಾಗಿರಲಿ

ನಮ್ಮ ಕನ್ನಡ ಭಾಷೆ, ಅತ್ಯಂತ ಪುರಾತನವಾದದ್ದು. ಕನ್ನಡ ಭಾಷೆಗೆ ತನ್ನದೆ ಆದ ಗೌರವವಿದೆ. ಭಾರತದಲ್ಲಿ ಕನ್ನಡಕ್ಕೆ ನಾಲ್ಕನೆಯ ಸ್ತಾನವಿದೆ. ಆದರೆ ಈಗ ಕರ್ನಾಟಕದಲ್ಲಿ ಇದನ್ನು ಮಾತನಾಡುವುದು ಕಡಿಮ್ಮೆಯಾಗಿದೆ. ಕಾರ್ಯಲಯಗಳಲ್ಲಿ, ಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಂತೂ ಕನ್ನಡಿಗರು ಕನ್ನಡ ಮಾತಾನಾಡುವುದೇ ಅಪರೂಪವಾಗಿದೆ.
ನಮ್ಮ ಜನರಿಗೆ ಅದು ಮಾತೃ ಭಾಷೆ ಎಂಬ ಅರವೇ ಇಲ್ಲದಂತ ಆಗಿದೆ. ಅದರಲ್ಲೂ ಈಗಿನ ವುದ್ಯಾವಂತರಂತೂ ಕನ್ನಡದಲ್ಲಿ ಮಾತನಾಡುವುದು ಎಂದರೆ ಅವರಿಗೆ ಕೀಳರಿಮೆಯ ವಿಚಾರವೆಂಬಂತಿದೆ. ವಿದ್ಯಾವಂತರು ತಮ್ಮ ಭಾಷೆ, ಜನ, ಸಂಸ್ಕ್ರತಿ ಮರೆತರೆ ಎನಾದಿತು? ಯೋಚಿಸಿ ! ಅದರಲ್ಲೂ ಬೇರೆ ರಾಜ್ಯಗಳಿಂದ ಎಷ್ಟೂಂದು ಜನ ಬಂದು ಕರ್ನಾಟಕದಲ್ಲಿ ವಾಸಿಸುತ್ತಿದಾರೆ? ಬೇರೆ ರಾಜ್ಯದವರು ನೆಲಸಬಾರದಂದೇನಿಲ್ಲ, ಆದರೆ ಅವರ ಭಾಷೆಯಂತೇ ಕನ್ನಡಕ್ಕೂ ಗೌರವ ಕೊಡಬೇಕು.
ನಾವು ಕನ್ನಡಿಗರು ಸಹಾ ಬೇರೆ ರಾಜ್ಯದವರಿಗೆ ನಮ್ಮಲ್ಲಿರು ಪ್ರೀತಿ, ಮಮತೆ, ಗೌರವ ಮಾತ್ತು ಮಾತನಾಡುವ ಶೈಲ್ಯವನ್ನು ಹೇಳಿಕೊಡುವುದು, ಕನ್ನಡಿಗರೆಲ್ಲರ ಪ್ರಮುಖ ಕರ್ತವ್ಯವಾಗಿರಲಿ. ಈ ನಮ್ಮ ಕರುನಾಡಿನಲ್ಲಿ ಎಷ್ಟೊ ಕವಿಗಳು ಬೇರೆ ರಾಜ್ಯದವರು, ಆದರೂ ಕೂಡ ಕನ್ನಡ ಭಾಷೆಯನ್ನು ಮೆಚ್ಚಿ ಕನ್ನಡದಲ್ಲಿ ಅವರು ತಮ್ಮ ಲೇಖನ, ಕವನ, ಕೃತಿಗಳನ್ನು ಬರೆದು ರಾಷ್ಟ್ರಿಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಅಂದ ಮೇಲೆ ನಾವು ಕನ್ನಡಿಗರಾದ್ದವರು ಕನ್ನಡವನ್ನು ಮಾತನಾಡದಿದ್ದರೆ ಅಂತವರನ ಎನೇಂದು ಕರೆಯಬೇಕು.
ಒಬ್ಬ ವಿದ್ಯಾವಂತಿಗೆ ಸುಮಾರು ಎರಡು - ಮೂರು ಭಾಷೆಗಳು ಬಂದೇ ಬರುತ್ತವೆ. ಅದರಲ್ಲಿ ಮೊದಲು ಕನ್ನಡ ಭಾಷೆಗೆ ಮಾನ್ಯತೆ ಕೊಡಬೇಕು.ಬೇರೆ ಭಾಷೆ ಅಗತ್ಯವಿದ್ದಾಗ ಮಾತ್ರ ಮಾತನಾಡಬೇಕು. ಆಗ ಈ ಸಂಪತ್ತಭರಿತ ಕರ್ನಾಟಕದ ಕನ್ನಡ ಭಾಷೆ ಎಂದೆಂದಿಗೂ ತನ್ನದೆ ಆದ ಸ್ಥಾನ ಬಿಟ್ಟುಕೋಡುವುದಿಲ್ಲ.
ದಯವಿಟ್ಟು ಎಲ್ಲಾ ಕರ್ನಾಟಕದ ಕರುನಾಡಿನ ನನ್ನ ಸ್ನೇಹಿತರೆ..... ಮನೆಯಲ್ಲಿರುವ ಮುದ್ದು ಮಕ್ಕಳನ್ನು ಕನ್ನಡದ ಶಾಲೆಗೆ ಕನ್ನಡ ಶಾಲೆಗೆ ಕಳುಹಿಸಿ ಕರುನಾಡನ್ನು ಬೆಳೆಸಿ