karunada geleya

dsfdsf

ನವೆಂ 5, 2017

"ನಾನು ಎಂದೂ ಮರೆಯಲಾರೆ." ಎಂದು ಹೇಳಿ ಪಕ್ಷಿ ಹಾರಿ ಹೋಯಿತು

ಒಂದು ಜಾಲಿಯ ಮರ.
ಅದರ ಮೈತುಂಬ ಮುಳ್ಳು. ಯಾರೂ ಅದರ ಬಳಿ ಸುಳಿಯುತ್ತಿರಲಿಲ್ಲ.
ಒಂಟಿ ಜೀವನ ಮರಕ್ಕೆ ಬೇಸರವಾಯಿತು.

ಯಾರಾದರೂ ಅತಿಥಿಗಳು ಬರಬಹುದು ಎಂದು ದಾರಿ ಕಾಯುತ್ತಿತ್ತು.
ಒಂದು ದಿನ ರಾತ್ರಿ ಒಂದು ಪಕ್ಷಿಯು ಆ ಮರದ ಮೇಲೆ ಬಂದು ಕುಳಿತಿತು.
ಮರಕ್ಕೆ ಹಿಡಿಸಲಾರದಷ್ಟು ಸಂತಸವಾಯಿತು 'ಅತಿಥಿ ದೇವೋಭವ' ಎಂದು ಈ ಪಕ್ಷಿಯನ್ನು ಗೌರವಾದರಗಳಿಂದ ಉಪಚರಿಸಿ ಆಶ್ರಯವನ್ನಿತ್ತಿತು. ಪಕ್ಷಿಯು ಸಂತಸದಿಂದ ರಾತ್ರಿಯನ್ನು ಕಳೆದು ಬೆಳಗಾಗುತ್ತಲೇ ಹೊರಟು ನಿಂತಿತು.
ಮಿತ್ರನೇ, ನೀನು ನನ್ನ ಕೂಡ ಇಲ್ಲಿಯೇ ಇದ್ದು ಬಿಡು ಎಂದು ಮರವು ಪಕ್ಷಿಗೆ ವಿನಂತಿಸಿತು.

ಪಕ್ಷಿ ಹೇಳಿತು - "ದೇವರು ನನಗೆ ಹಾರಲು ಪಕ್ಕಗಳನ್ನು ಕೊಟ್ಟಿದ್ದಾನೆ.
ನಿನಗೆ ಸ್ಥಿರವಾಗಿರಲು ಬೇರನ್ನು ಕೊಟ್ಟಿದ್ದಾನೆ.
ನಾನು ಹಾರುತ್ತಿರಲೇಬೇಕು. ನೀನು ಒಂದು ಕಡೆ ಸ್ಥಿರವಾಗಿರಲೇಬೇಕು.
ಅದುವೇ ಜೀವನದ ರೀತಿ. ಮತ್ತೆ ಎಂದಾದರೂ ಸಮಯ ಸಿಕ್ಕಾಗ ನಾನು ಬರುತ್ತೇನೆ.
ನಿನ್ನ ಉಪಕಾರವನ್ನು ನಾನು ಎಂದೂ ಮರೆಯಲಾರೆ." ಎಂದು ಹೇಳಿ ಪಕ್ಷಿ ಹಾರಿ ಹೋಯಿತು.

ಮರವು ಇನ್ನೂ ಮಿತ್ರನ ದಾರಿ ಕಾಯುತ್ತಲಿದೆ.
ನಾವು ಕೂಡಿದಾಗ ಸುಖಿಸಬೇಕು.
ಅಗಲಿದಾಗ ಕೂಡಿದ ಸುಖವನ್ನು ಸ್ಮರಿಸುತ್ತ ಸಂತಸದಿಂದಿರಬೇಕು.

ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಸಲಹೆಗಾಗಿ ನಾನು ಕಾಯುತ್ತಿರುತ್ತೇನೆ