karunada geleya

dsfdsf

ನವೆಂ 5, 2017

ಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕ

ಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕಥೆಯಿದು-

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಸೀರ್ಯಲ್ ನೋಡೋ ಮಹಿಳೆಯ
ಪರಿಯನೆಂತು ಪೇಳ್ವೆನು

ಮಳೆಯ ಊರಿನ ಮನೆಯ ಒಳಗೆ
ಕೆಲಸ ಮುಗಿಸಿ ಕುಳಿತ ಮಹಿಳೆಯು
ಧಾರಾವಾಹಿಗಳೆಲ್ಲವನ್ನೂ
ಬಳಿಗೆ ಕರೆದಳು ಹರುಷದಿ

ಲಕ್ಷ್ಮಿ ಬಾರೆ ರಾಧ ಬಾರೆ
ಅಶ್ವಿನೀ ನಕ್ಷತ್ರ ಬಾರೆ
ಪುಟ್ಟ ಗೌರೀ ನೀನು ಬಾರೆ
ಎಂದು ಮಹಿಳೆಯು ಕರೆದಳು

ಆಂಟಿ ಕರೆದಾ ದನಿಯ ಕೇಳಿ
ಎಲ್ಲರೂ ಅಲ್ ಬಂದು ನಿಂತು
ಚೆಲ್ಲಿ ಸೂಸಿ ಕಣ್ಣೀರ್ಗರೆಯಲು
ಅಲ್ಲಿ ತುಂಬಿತು ಬಿಂದಿಗೆ

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕಥೆಯಿದುII

ಹಬ್ಬಿದಾ ಮಲೆ ಮಧ್ಯದೊಳಗೆ
ಗ್ರಾಫಿಕ್ಸೈತಾನೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ದುಡುಕಲೆಗರಿದ ರಭಸಕಂಜಿ
ಓಡಿ ಹೋದವು ಉಳಿದವು

ಪುಟ್ಟಗೌರಿ ಎಂಬ ಹುಡುಗಿ
ತನ್ನ ಗಂಡನ ನೆನೆದುಕೊಂಡು
ಮತ್ತೆ ಸುಖವಾಗಿರುವೆನೆನುತಾ
ಚೆಂದದಿ ತಾ ಬರುತಿರೆ

ಇಂದು ಎನಗಾಹಾರ ಸಿಕ್ಕಿತು
ಎಂದು ಬೇಗನೆ ಗ್ರಾಫಿಕ್ಸ್ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೇ
ಬಿಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಗ್ರಾಫಿಕ್ಸ್ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೇ ಕೇಳು
ಮಹೆಶನಿರುವನು ಮನೆಯ ಒಳಗೆ
ಒಂದು ನಿಮಿಷದಿ ಮುಖವ ತೋರಿಸಿ
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚಳಾ ಅಜ್ಯಮ್ಮನು

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕತೆಯಿದುII

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಮಹೆಶ ನಿನ್ನನು ನೋಡಿ ಪೋಗುವೆನೆಂದು
ಬಂದೆನು ದೊಡ್ಡಿಗೆ

ಗೌರಿ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಮಹೆಶ ಗೌರಿಗೆ ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೊಡಹುಟ್ಟಗಳಿರ
ಮಹೆಶ ನಿಮ್ಮವನೆಂದು ಕಾಣಿರಿ
ಮುಂದೆ ಹಿಮನಿಗೆ ಗಂಡನು

ಕುಡಿದು ಬಂದರೆ ಬಯ್ಯಬೇಡಿ.
ಹೊರಗೆ ಹೋದರೆ ಹೊಡೆಯಬೇಡಿ.
ಮಹೆಶ ನಿಮ್ಮವನೆಂದು ಕಾಣಿರಿ
ಮುಂದೆ ಹಿಮನಿಗೆ ಗಂಡನು

ತಬ್ಬಲಿಯು ನೀನಾದೆ ಮಹೆಶಾ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಳು ಗಂಡನಾ

IIಸತ್ಯವೇ ಭಗವಂತನೆಂಬ ಪುಟ್ಟಗೌರಿಯ ಕತೆಯಿದುII

ಗೌರಿ ಗಂಡನ ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಳು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಗ್ರಾಫಿಕ್ಸ್ ವ್ಯಾಗ್ರನೆ ನಿನಿದೆಲ್ಲವನುಂಡು
ಸಂತಸದಿಂದಿರು

ಪುಟ್ಟ ಗೌರಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಧಾರವಾಹಿಯೆ ಮುಗಿವುದು.

ನಿರ್ಮಾಪಕನಿಗೆ ದೇವ್ರು ನೀನು 
ನಿನ್ನ ಕೊಂದರೆ ಅವ ಏನ ಪಡೆವನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಯಾವಾಗಲೂ ಕೆಳಗಿನ ಬ್ರಾಂಡ್ ವಸ್ತುಗಳನ್ನೇ ಬಳಸಿ

ಯಾರೋ ಚಾಣಕ್ಯನನ್ನು ಕೇಳಿದರಂತೆ.

1. ವಿಷ ಎಂದರೇನು?
ಆತ ಬಹು ಸುಂದರ ಉತ್ತರ ನೀಡಿದ - ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷ. ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ದುರಾಸೆ, ಸೋಮಾರಿತನವಿರಬಹುದು, ಪ್ರೇಮ, ಆಕಾಂಕ್ಷೆ, ದ್ವೇಷ ಅಥವಾ ಯಾವುದಾದರೂ ಇರಬಹುದು
 2. ಭಯ ಎಂದರೇನು?
ಅನಿಶ್ಚಿತತೆಯನ್ನು ಒಪ್ಪದಿರುವುದು. ಆ ಅನಿಶ್ಚಿತತೆಯನ್ನು ನಾವು ಒಪ್ಪಿಕೊಂಡರೆ ಅದು ಸಾಹಸ ಆಗುತ್ತದೆ..!

3. ಅಸೂಯೆ ಎಂದರೇನು?
ಇನ್ನೊಬ್ಬರಲ್ಲಿನ ಒಳ್ಳೆಯತನವನ್ನು ಒಪ್ಪದಿರುವುದು. ಆ ಒಳ್ಳೆಯತನವನ್ನು ಒಪ್ಪಿಕೊಂಡರೆ ಅದು ಪ್ರೇರಣೆ ಆಗುತ್ತದೆ.

4. ಕೋಪ ಎಂದರೇನು?
ನಮ್ಮ ನಿಯಂತ್ರಣದಾಚೆಯ ವಿಷಯಗಳನ್ನು ಒಪ್ಪದಿರುವುದು. ಅವನ್ನು ಒಪ್ಪಿಕೊಂಡರೆ ಅದು ಸಹಿಷ್ಣುತೆ ಆಗುತ್ತದೆ.

5. ದ್ವೇಷ ಎಂದರೇನು?
ಒಬ್ಬ ಮನುಷ್ಯನನ್ನು ಅವನಿರುವಂತೆಯೇ ಒಪ್ಪದಿರುವುದು . ಆ ಮನುಷ್ಯನನ್ನು ಬೇಷರತ್ತಾಗಿ ಒಪ್ಪಿಕೊಂಡರೆ ಅದು ಪ್ರೀತಿ ಆಗುತ್ತದೆ.

ಎಲ್ಲವೂ ಒಪ್ಪಿಕೊಳ್ಳುವಿಕೆಗೆ ಸಂಬಂಧಿಸಿದ್ದು. ವಿರೋಧಿಸುವಿಕೆಯು ಒತ್ತಡವನ್ನು ಸೃಷ್ಟಿಸುತ್ತದೆ. ಒಪ್ಪಿಕೊಳ್ಳುವಿಕೆಯು ಒತ್ತಡವನ್ನು ದೂರ ಮಾಡುತ್ತದೆ.
ಶಾಂತವಾಗಿ ಆಲೋಚಿಸಿ ನೋಡಿ.

*ಯಾವಾಗಲೂ  ಕೆಳಗಿನ  ಬ್ರಾಂಡ್ ವಸ್ತುಗಳನ್ನೇ ಬಳಸಿ *

1. ತುಟಿಗಳಿಗೆ "ಸತ್ಯ "
2. ಶಬ್ದಗಳಿಗೆ "ಪ್ರಾರ್ಥನೆ "
3. ಕಣ್ಣಿಗಳಿಗೆ "ದಯೆ"
4. ಕೈಗಳಿಗೆ "ದಾನ"
5. ಹೃದಯಕ್ಕಾಗಿ "ಪ್ರೇಮ"
6. ಮುಖಕ್ಕೆ "ನಗೆ"
7. ದೊಡ್ಡವನಾಗಲು "ಕ್ಷಮೆ"

ಜೂನ್ 5, 2017

ಇತರರಿಗೆ ಸೇರಿದ ಈ 5 ವಸ್ತುಗಳನ್ನು ...ನಾವೆಂದಿಗೂ ಉಪಯೋಗಿಸಲೇಬಾರದಂತೆ! ಯಾಕೆಂದು ಗೊತ್ತಾ ?

ಇತರರಿಗೆ ಸೇರಿದ ಈ 5 ವಸ್ತುಗಳನ್ನು ...ನಾವೆಂದಿಗೂ ಉಪಯೋಗಿಸಲೇಬಾರದಂತೆ! ಯಾಕೆಂದು ಗೊತ್ತಾ ?: ಒಬ್ಬರು ಉಪಯೋಗಿಸಿದ ವಸ್ತುಗಳನ್ನು ಇತರರು ಉಪಯೋಗಿಸಬಾರದೆಂದು ವಿಜ್ಞಾನವೂ ಸಹ ಹೇಳುತ್ತದೆ.

ಈ ಸೂಚನೆಗಳನ್ನು ಪಾಲಿಸಿದರೆ ಆರ್ಥಿಕ ಸಮಸ್ಯೆಗಳು ತೊಲಗಿ ಹಣ ಸಂಗ್ರಹವಾಗುತ್ತದೆ..!

ಈ ಸೂಚನೆಗಳನ್ನು ಪಾಲಿಸಿದರೆ ಆರ್ಥಿಕ ಸಮಸ್ಯೆಗಳು ತೊಲಗಿ ಹಣ ಸಂಗ್ರಹವಾಗುತ್ತದೆ..!: 6.ಲಕ್ಷ್ಮೀ ದೇವಿಯನ್ನು ಅಕ್ಕಿಯಿಂದ ಪೂಜಿಸಿ, ಸ್ವಲ್ಪ ಅಕ್ಕಿಯನ್ನು ಉಳಿಸಿಕೊಳ್ಳಬೆಕು

ಸಣ್ಣ ಮಕ್ಕಳು ಅಳುವುದು ಸಹಜ. ಹಸಿವಾದಾಗ, ನೋವಾದಾಗ, ಭಯವಾದಾಗ ಅಳುತ್ತಾರೆ.

ಸಣ್ಣ ಮಕ್ಕಳು ಅಳುವುದು ಸಹಜ. ಹಸಿವಾದಾಗ, ನೋವಾದಾಗ, ಭಯವಾದಾಗ ಅಳುತ್ತಾರೆ.: ಒಂದು ನಿಮಿಷದಲ್ಲಿ ಚಿಕ್ಕ ಮಕ್ಕಳ ಅಳು ನಿಲ್ಲಿಸಬಹುದು. ತಾಯಂದಿರಿಗೆ ಉಪಯೋಗಕ್ಕೆ ಬರುವ ಟ್ರಿಕ್ ಇದು.!

ಯಾವುದಾದರೂ ಅಪರಾಧ ನಡೆದಾದ ಪೊಲೀಸರು ಮೊದಲು ಎಫ್ಐಆರ್ (

ಯಾವುದಾದರೂ ಅಪರಾಧ ನಡೆದಾದ ಪೊಲೀಸರು ಮೊದಲು ಎಫ್ಐಆರ್ (: F.I.R ಅಂದರೆ ಏನು...ಅದನ್ನು ಹೇಗೆ ಫೈಲ್ ಮಾಡುವುದು...ಅದರಿಂದ ಉಪಯೋಗ ಏನು ನಿಮಗೆ ಗೊತ್ತೆ?

ಈ ಮೂಲಗಳಿಂದ ನಿಮಗೆ ಆದಾಯ ಬರುತ್ತಿದೆಯೇ..? ಹಾಗಾದರೆ ಆ ಹಣಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ..!

ಈ ಮೂಲಗಳಿಂದ ನಿಮಗೆ ಆದಾಯ ಬರುತ್ತಿದೆಯೇ..? ಹಾಗಾದರೆ ಆ ಹಣಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ..!: 4.ಯಾವುದಾದರೂ ಪಾಲುದಾರ ಸಂಸ್ಥೆಯಲ್ಲಿ ಪಾಲುಗಾರನಾಗಿದ್ದರೆ, ಆ ಸಂಸ್ಥೆಯ ಆದಾಯದಲ್ಲಿ

ಇತರರನ್ನು ನಿಮ್ಮ ದಾರಿ ತಂದುಕೊಳ್ಳಬೇಕೆಂದರೆ ಹೀಗೆ ಮಾಡಿ. ಚಾಣಕ್ಯ ಹೇಳಿದ ಮಹತ್ವದ ಅಂಶಗಳು

ಇತರರನ್ನು ನಿಮ್ಮ ದಾರಿ ತಂದುಕೊಳ್ಳಬೇಕೆಂದರೆ ಹೀಗೆ ಮಾಡಿ. ಚಾಣಕ್ಯ ಹೇಳಿದ ಮಹತ್ವದ ಅಂಶಗಳು: ಆಚಾರ್ಯ ಚಾಣಕ್ಯ ಮಾನವರಿಗೆ ತಿಳಿಸಿದ ನೀತಿ ಸೂತ್ರಗಳು ಇವೆ.

ಇದು ನನ್ನ ನಿದ್ರೆಯನ್ನು ಹಾಳು ಮಾಡಿತು

ರಾತ್ರಿ ಸಮಯ ಅಂಗಡಿಯ
ಮಾಲೀಕ ಅಂಗಡಿಯನ್ನು , ಮುಚ್ಚುವ ತವಕದಲ್ಲಿ ಇದ್ದನು..
ಅಷ್ಟರಲ್ಲಿ ಒಂದು ನಾಯಿ ಅಲ್ಲಿಗೆ ಬಂದಿತು.

ಅದರ ಬಾಯಿಯಲ್ಲಿ ಒಂದು
ಪ್ಲಾಸ್ಟಿಕ್ ಚೀಲ ಇತ್ತು .. ಆ ಚೀಲದಲ್ಲಿ ಸಾಮಾನುಗಳ ಚಿಟಿ ಮತ್ತು ಹಣ ಇತ್ತು..

ಅಂಗಡಿಯವನು ಹಣವನ್ನು ತೆಗದುಕೊಂಡು ಸಾಮಾನುಗಳನ್ನು ಆ ಚೀಲದಲ್ಲಿ ತುಂಬಿದನು ನಾಯಿಯ ಬಾಯಿಯಿಂದ ಆ ಚೀಲವನ್ನು ತೆಗದುಕೊಂಡು ಹೊರಟಿತು..

ಅಂಗಡಿಯವ ಅಶ್ಚರ್ಯಚಕಿತನಾಗಿ ನಾಯಿ ಹಿಂದೆ ಹಿಂದೆ ತೆರಳಿದನು ... ಯಾಕೆಂದರೆ ನಾಯಿಗೆ ಎಷ್ಟು ತಿಳುವಳಿಕೆ ಇದೆ ಮತ್ತು ಇದರ ಮಾಲೀಕರು ಯಾರು ಎಂದು ಪರಿಶೀಲನೆ ಮಾಡಲು.!

ನಾಯಿ ಬಸ್ ಸ್ಟಾಪ್ ನಲ್ಲಿ ನಿಂತಿತ್ತು.. ಸ್ವಲ್ಪ ಸಮಯದ ನಂತರ ಬಸ್ ಬಂದಿತು.. ನಾಯಿ ಬಸ್ ಅನ್ನು ಹತ್ತಿತು.

ಕಂಡಕ್ಟರ್ ಬಂದಾಗ ತಲೆ ಮುಂದೆ ಚಾಚಿತು.ಕಂಡಕ್ಟರ್ ನಾಯಿಯ ಕೊರಳುನಲ್ಲಿ ಇರುವ ಪಟ್ಟಿಯಲ್ಲಿ ಇರುವ ವಿಳಾಸವನ್ನು ನೋಡಿ ಹಣ ತೆಗದುಕೊಂಡು ನಾಯಿಯ ಕೊರಳಲ್ಲಿ ಟಿಕೆಟ್ ಇಟ್ಟನು.

ನಾಯಿ ಇಳಿಯುವ ಜಾಗ ಬಂದಾಗ ಮುಂದಿನ ಬಾಗಿಲಿನಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಬಸ್ ನಿಲ್ಲಿಸುವಂತೆ ಸನ್ನೆ ಮಾಡಿತು‌.

ಬಸ್ ನಿಂತ ಮೇಲೆ ಬಾಲ ಅಲ್ಲಾಡಿಸುತ್ತ  ಇಳಿದು ಹೋಗುತ್ತಿತ್ತು.

ಅಂಗಡಿಯವನಿಗೆ ಇನ್ನು ಉತ್ಸಾಹ ಹೆಚ್ಚಾಗಿತ್ತು.. ನಾಯಿ ಹಿಂದೆ , ಹಿಂದೆ ಬರುತ್ತಿದ್ದನು.‌

ನಾಯಿ ಒಂದು ಮನೆಯ ಹತ್ತಿರ
ಬಂದು ನಿಂತು ಚೀಲವನ್ನು ಕೆಳಗೆ ಇಟ್ಟು ಕಾಲಿನಿಂದ ಮೂರು ಸಲ ಬಾಗಿಲು ಬಡಿಯಿತು.

ಒಳಗಡೆಯಿಂದ ನಾಯಿಯ ಮಾಲಿಕ ಬಂದು ಕಟ್ಟಿಗೆಯಿಂದ ನಾಯಿಯನ್ನು ಹೊಡೆದನು.

ಅಂಗಡಿಯವವನು ನಾಯಿಯ ಮಾಲಿಕನಗೆ ಕೇಳಿದನು.
ನಾಯಿಯನ್ನು ಯಾಕೇ ಹೊಡೆದೆ ಎಂದು.?

ನಾಯಿಯ ಮಾಲಿಕ ಹೇಳಿದನು..

ಇದು ನನ್ನ ನಿದ್ರೆಯನ್ನು ಹಾಳು ಮಾಡಿತು..

ಹಣ , ಚೀಟಿ ಮತ್ತು ಚೀಲ ತೆಗದುಕೊಂಡ ಹೋದ ಇದು
ಕೀಲಿಯನ್ನು ಯಾಕೇ ಮರೆತು ಹೋಗಬೇಕಾಗಿತ್ತು  ಎಂದು ಬೈದನು.

#ಜೀವನದಸತ್ಯವುಇಷ್ಟೇ

ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ ಮಾಡುವ ದಿನಗಳಷ್ಟು ಮಾತ್ರ
ಒಳ್ಳೆಯವರು ಅಗಿ ಕಾಣುತ್ತೇವೆ.

ನಮ್ಮಿಂದ ಒಂದು ಚಿಕ್ಕ ತಪ್ಪು ಅದರು ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ.

ಅದ್ದರಿಂದ ನಾವು ಮಾಡುವ ಕೆಲಸ ಒಳ್ಳೆಯದು ಅಗಿದ್ದರೆ
ಅದೆ ದಾರಿಯಲ್ಲಿ ಮುಂದುವರಿಯುವುದು ಉತ್ತಮ.

ನಾವು ಮಾಡುವ ಕೆಲಸಗಳು
ಜನರನ್ನು ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲ್ಲ.